ಸ್ನೇಹಕ್ಕಾಗಿ...........,,,,,,,,,,,

Monday, August 10, 2009

ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದು ನಮ್ಮನ್ನಗಲಿದ ಆ ಮಹಾನ ಚೇತನಗಳಿಗೆ ಇದೋ ನಮ್ಮ ನಮನ.....,

ಅವು ಸ್ವಾತಂತ್ರ್ಯ ಮೂರ್ವದ ದಿನಗಳು,ನಮ್ಮ ದೇಶ ಬ್ರೀಟಿಷರ ಆಡಳಿತದಲ್ಲಿ ಇತ್ತು,ಭಾರತೀಯರಿಗೆ ತುಂಬಾ ಕಷ್ಟದ ದಿನಗಳು, ಇಡಿ ಭಾರತವನ್ನೆ ತಮ್ಮ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದ ಆಂಗ್ಲರದಬ್ಬಾಳಿಕೆಯ ಕರಿನೆರಳನ್ನು ಉಳಿಸಿ ಹೋದ ದಿನಗಳು, ಭಾರತೀಯರಲ್ಲಿಯ ಸ್ವಾಭಿಮಾನ, ಆತ್ಮಸ್ಥೈರ್ಯವನ್ನುಕಂಗೆಡಿಸಿದ ದಿನಗಳು, ಭಾರತೀಯರು ತಮ್ಮ ದೇಶದ ಪರಂಪರೆ,ಸಂಸ್ಕೃತಿ,ಇತಿಹಾಸವನ್ನು ಬ್ರೀಟಿಷರ ಗುಲಾಮಗಿರಿಯಲ್ಲಿಮರೆತೆಬಿಟ್ಟೆವೇನೋ ? ಅನ್ನುವಷ್ಟರ ಮಟ್ಟಿಗೆ ಕಂಗೆಟ್ಟ ದಿನಗಳು, ಇಂತಹ ಸಂದರ್ಬದಲ್ಲಿ ಭಾರತೀಯರಲ್ಲಿಸ್ವಾತಂತ್ರ್ಯದ ಕಲ್ಪನೆ ಹಾಗೂ ಅದರ ಸಾಕಾರದ ಬಗ್ಗೆ ಅನೇಕ ಮಹಾನ ಣ್ಯರು ಬ್ರೀಟಿಷರ ಕಪಿ ಮುಷ್ಟಿಯಲ್ಲಿಸಿಲುಕಿಹಾಕಿಕೊಂಡು ಮಲಗಿದ್ದ ಭಾರತೀಯರನ್ನು ಬಡಿದೆಬ್ಬಿಸಿದರು. ಸ್ವಾತಂತ್ರ್ಯದ ಒಂದು ಕಲ್ಪನೆಯನ್ನುಭಾರತೀಯಲ್ಲಿ ತುಂಬಿದರು.ಜನರನ್ನೆಲ್ಲ ಜಾಗೃ ನ್ನಾಗಿ ಮಾಡಿದರು, ಇಡೀ ದೇಶದ ತುಂಬೆಲ್ಲ ಸ್ವಾತಂತ್ರ್ಯದ ಕಹಳೆಯನ್ನು ಉದಿದರು. "ಬ್ರೀಟಿಷರೆಭಾರತವನ್ನು ಬಿಟ್ಟು ತೊಲಗಿ" "ಭಾರತ ಮಾತಾಕಿ ಜೈ" ಎಂತೆಲ್ಲ ಘೋಷಣೆಗಳು ಬ್ರೀಟಿಷ ವಿರುದ್ದ ಕೂಗುವಂತೆ ಮಾಡಿದರು, ಮಹಾತ್ಮ ಗಾಂಧಿ,ಜವಾಹರಲಾಲ ನೇಹರು,ವಲ್ಲಭಾಯಿ ಪಟೇಲ,ಸುಬಾಷ ಚಂದ್ರ ಬೋಸ,ಲಾಲ ಲಜಪತರಾಯ್, ಭಗತಸಿಂಗ್ ರಂತ ಮಾಹಾನ ವ್ಯಕ್ತಿಗಳು ತಮ್ಮ ಚಳುವಳಿಗಳ ಮುಖಾಂತರ ಬ್ರೀಟಿಷರ ವಿರುದ್ದ ಸಿಡಿದೆದ್ದರು, ಮಹಾತ್ಮ ಗಾಂಧಿಯವರು "ಉಪ್ಪಿನ ಸತ್ಯಾಗ್ರಹ", "ಅಸಹಕಾರ ಚಳುವಳಿಗಳ" ಳಂತ ಅಹಿಂಸಾತ್ಮಕ ಚಳುವಳಿಗಳಮುಲಕ ಸ್ವಾತಂತ್ರ್ಯ ಪಡೆಯಲು ಜನರನ್ನು ಪ್ರೇರೆಪಿಸಿ ದರು, ಚಳುವಳಿಯಲ್ಲಿ ಅನೇಕ ಜನ ದೇಶದಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಾಪ್ರಣೆಯನ್ನು ಮಾಡಿದರು.
ಭಗತಸಿಂಗ್,ಚಂದ್ರಶೇಖರ ಅಜಾಧ,ಸುಖದೇವ ರಂತ ಕ್ರಾಂತಿಕಾರಿಗಳು ತಮ್ಮ ಚಳುವಳಿಗಳ ಮುಲಕ ಬ್ರೀಟಿಷರವಿರುದ್ದ ಸಿಡಿದೆದ್ದರು, ಅನೇಕ ಜನ ಬ್ರೀಟಿಷರ ಗುಂಡೆಟಿಗೆ ಬಲಿಯಾದರು, ಅನೇಕರನ್ನು ಗಲ್ಲಿಗೆ ಏರಿಸಲಾಯಿತು,
ಅನೇಕ ಜನ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಣೆಯನ್ನ ಮಾಡಿದರು,
ಇಂತಹ ಮಹನಿಯರ ತ್ಯಾಗ ಹಾಗೂ ಬಲಿದಾನದ ಫಲವಾಗಿ 1947 ಅಗಷ್ಟ15 ರಂದು ಬ್ರೀಟಿಷರು ನಮ್ಮದೇಶವನ್ನು ಬಿಟ್ಟು ತೋಲಗಿದರು, ಅಂದು ಭಾರತವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ಸ್ವಾತಂತ್ರ್ಯಸಂಗ್ರಾಮದಲ್ಲಿ ಮಡಿದು ವೀರ ಮರಣವನ್ನು ಪಡೆದ ನಮ್ಮನ್ನಗಲಿದ ಮಹಾನ್ ಚೇತನಗಳಿಗೆ ಇದೋ ನಮ್ಮ ನಮನ,,,,,

3 comments:

  1. ಮಂಜು, ನಿಮ್ಮ ಈ ಲೇಖನಕ್ಕೆ ಪ್ರತಿಕ್ರಿಯೆ ಬರದೇ ಇರುವುದು ನೋಡಿದೆ..ನಾನು ಹೇಗೆ ಇದನ್ನು ಮಿಸ್ ಮಾಡಿದ್ದು ಅನಿಸುತ್ತಿದೆ...,,ಏಕಂದ್ರೆ..ನಿಸ್ವಾರ್ಥ ಸೇವೆಯ ಪ್ರತೀಕಗಳು ಇವರು, ಬಾಪು, ತಿಲಕ್,ಭಗತ್, ಬೋಸ್..ಎಲ್ಲ...
    ಕುರ್ಚಿಯೇ ಜೀವ ಅಧಿಕಾರವೇ ಸರ್ವಸ್ವ ಮತ್ತು ಹಣವೇ ದೈವ ಎನ್ನುವ ಇಮ್ದಿನ ಜನನಾಯಕರಿಗೆ...ಇವರ ೦.೦೦೧% ಸೇವಾ ಮನೋಭಾವ ಬಂದರೂ ದೇಶ ಉದ್ಧಾರವಾದೀತು.

    ReplyDelete
  2. ನಮಸ್ಕಾರ ಸಾರ್,
    ತುಂಬಾ ಧನ್ಯವಾದಗಳು, ನನ್ನ ಬರಹಕ್ಕೆ ಪ್ರತಿಕ್ರೀಯಿಸಿದಕ್ಕಾಗಿ, ನಾನು ಈ ರೀತಿಯ ಬರಹಗಳನ್ನು ಯಾರು ಓದುತ್ತಾರೆ, ಕಂಡಿತಾ ಯಾರು ಓದಲಿಕ್ಕಿಲ್ಲ ಅಂತಾ ಅಂದುಕೊಂಡಿದ್ದೆ ಆದರೆ ತಾವು ಓದಿ ನಿಮ್ಮ ಅನಿಸಿಕೆಯನ್ನು ಬರೆದಿದ್ದಿರಿ ತುಂಬಾ ಧನ್ಯವಾಗಳು,
    *ಇಂತಿ ನಿಮ್ಮ
    ಮಂಜುನಾಥ ತಳ್ಳಿಹಾಳ
    ಗದಗ ಜಿಲ್ಲೆ

    ReplyDelete
  3. ಪ್ರಿಯ ಮಂಜು ತಳ್ಳಿಹಾಳರಿಗೆ ನಮಸ್ಕಾರ
    ಮತ್ತೆ ಬಂದೆ ಬಲು ಕಾಲಕಳೆದ ನಂತರ.
    ಅಂತರಜಾಲದಲಿ ಅನಿರೀಕ್ಷಿತ ಅಲೆದಾಡಿ
    "ಸ್ನೇಹಕ್ಕಾಗಿ" ಪುಟ ಸೇರಿ ಮನಕಾಯ್ತು ಮೋಡಿ.
    ಅನ್ನಿಸಿ ಮಗದೊಮ್ಮೆ ಪ್ರತ್ಯಕ್ಷವಾಗಿ ಕೂಡಿ,
    ವಿಶ್ವಾಸ ತಿಳಿಸೆ ಬಂದೆ ನಿಮ್ಮ ನೋಡಿ.
    - ವಿಜಯಶೀಲ, ೦೫.೦೫.೨೦೧೧

    ReplyDelete

ನಿಮ್ಮ ಅನಿಸಿಕೆಯನ್ನು ಇಲ್ಲಿ ಬರಿರೀ,